

20th May 2026

ಬಳ್ಳಾರಿ, ಮೇ,20- ವೀ.ವಿ.ಸಂಘದ ಪ್ರತಿಷ್ಠಿತ ವೀರಶೈವ ಮಹಾವಿದ್ಯಾಲಯದ ದೈಹಿಕ ಶಿಕ್ಷಣ ಮತ್ತು ಕ್ರಿಡಾ ವಿಭಾಗದಿಂದ ನಿನ್ನೆ ಬೆಳಗ್ಗೆ 9.00 ಗಂಟೆಗೆ ವಾರ್ಷಿಕ ಕ್ರೀಡಾಕೂಟ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೀರಶೈವ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷರಾದ ಸಾಹುಕಾರ್ಸತೀಶ್ ಬಾಬು ವಹಿಸಿದ್ದರು. ವಾರ್ಷಿಕ ಕ್ರೀಡಾ ಕೂಟವನ್ನು ಉದ್ದೇಶಿಸಿ ವಿದ್ಯಾರ್ಥಿಗಳಿಗೆ “ಸದೃಢ ದೇಹದಲ್ಲಿ ಸದೃಢ ಮನಸ್ಸು” ಎಂದು ತಿಳಿಸಿದರು.
ವಿಎಸ್ ಕೆ ವಿವಿ ಕುಲಸಚಿವ ಪ್ರೋ.ಎನ್.ಎಂ.ಸಾಲಿ ಯವರು ಕ್ರೀಡಾಕೂಟವನ್ನು ಉದ್ಘಾಟಸಿ ಮಾತನಾಡುತ್ತ ಎಲ್ಲಾ ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯತೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕೆಂದು ಕರೆ ನೀಡಿದರು. ಮಹಾವಿದ್ಯಾಲಯದ ಪ್ರಾಚಾರ್ಯರಾದ ಶ್ರೀ.ಜಿ.ಮಲ್ಲನಗೌಡ ಇವರು ಪ್ರಾಸ್ತಾವಿಕ ನುಡಿ ಮಾತನಾಡಿದರು.
ಈ ಕಾರ್ಯಕ್ರಮದ ವೇದಿಕೆಯಲ್ಲಿ ಹೆಚ್.ಪಿ.ಜಯಪ್ರಕಾಶ್ ಗೌಡ, ಹೆಚ್.ಚಂದ್ರಶೇಖರ್ ಗೌಡ, ಡಾ.ಶಶಿದರ್.ಎ.ಕೆಲ್ಲೂರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮಕ್ಕೆ ವೀರಶೈವ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯರುಗಳಾದ ಎಸ್.ವೆಂಕಟೇಶ್ಗೌಡ, ಕಾರದಪುಡಿ ಮುದ್ದನಗೌಡ, ಅಕ್ಕಿ ಶಿವರಾಜ್ ಮತ್ತು ಡಿ.ನಂಜುಂಡಪ್ಪ ಮತ್ತು ವೀರಶೈವ ಪದವಿ ಪೂರ್ವ ಕಾಲೇಜಿನ ಸದಸ್ಯರಾದ ಮಹೇಶ್ಶ್ವರ ಸ್ವಾಮಿ ರವರು ಭಾಗವಹಿಸಿದ್ದರು. ವೀರಶೈವ ಮಹಾವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು 400ಕ್ಕು ಹೆಚ್ಚು ವಿದ್ಯಾರ್ಥಿಗಳು ವಾರ್ಷಿಕ ಕ್ರಿಡಾ ಕೂಟದಲ್ಲಿ ಭಾಗವಹಿಸಿದ್ದರು. ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ.ಕವಿತಾ ಸಂಗನಗೌಡ.ಎಂ ರವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಡಾ ಶರಣಬಸವ, ಮುಖ್ಯಸ್ಥರು ಸಸ್ಯಶಾಸ್ತ್ರ ವಿಭಾಗ ಇವರು ಸ್ವಾಗತಿಸಿದರು. ಡಾ.ವಿನೋದಕುಮಾರ, ಐ.ಕ್ಯೂ.ಎ.ಸಿ, ಸಂಯೋಜಕರು ಇವರು ಪ್ರತಿಜ್ಞಾ ವಿಧಿ ಬೋಧಿಸಿದರು. ಕುಮಾರಿ.ರೇಖಾಶ್ರಿ.ಎಸ್. ಉಪನ್ಯಾಸಕರು, ಸಸ್ಯಶಾಸ್ರ್ತ ವಿಭಾಗ ವಂದಿಸಿದರು.

ಮಹಾನ್ ಮಾನವತಾವಾದಿ ಜ್ಯೋತಿರಾವ್ ಪುಲೆ ಅವರ ಜೀವನ ವ್ಯಕ್ತಿತ್ವ ಮಕ್ಕಳು ಬೆಳಿಸಿಕೊಳ್ಳಲು ಕರೆ

ದಾಸ ಸಾಹಿತ್ಯದಲ್ಲಿ ಅನುಪಮ ಸೇವೆಗೈದ ವರ್ಷದ ಶ್ರೇಷ್ಠ ವ್ಯಕ್ತಿಗಳಿಗೆ ಶ್ರೀಗಳವರಿಂದ "ವಿಶ್ವಮಾನ್ಯ ಪ್ರಶಸ್ತಿ"